Monday, April 7, 2008

ellections


ರಾಜ್ಯದಲ್ಲಿ ಮತ್ತೆ ಬಂತು ಚುನಾವಣೆ, ಯಾರ ತಪ್ಪಿಗೆ ಮತ್ತೆ ಮತ್ತೆ ಚುನಾವಣೆ?
ಕಾನೂನುಗಳ ರಚನೆ ಮಾಡುವವರು ಯಾರು? ನಾವು ಆರಿಸಿ ಕಳಿಸಿದ ಪ್ರತಿನಿಧಿಗಳು ಅಂದರೆ ಶಾಸಕರು, ಶಾಸಕರ ಮುಖ್ಯ ಕೆಲಸ ಶಾಸನಗಳನ್ನು ಮಾಡುವುದು, ಕನ್ನಡವನ್ನು ಸರಿಯಾಗಿ ಉಚ್ಚರಿಸಲಾಗದ ವ್ಯಕ್ತಿಗಳನ್ನು ಆರಿಸಿ ಕಳಿಸಿದರೆ ಕನ್ನಡದ ಗತಿ ಏನು? ತೆರಿಗೆ ಕಳ್ಳರನ್ನು, ಭೂ ಮಾಫಿಯಾಯದವರನ್ನು, ಕ್ರಿಮಿನಲ್ ಹಿನ್ನಲೆ ಉಳ್ಳವರನ್ನು ಆರಿಸಿ ಕಳುಹಿಸಿದರೆ ಎಂಥಹ ಕಾನುನುಗಳನ್ನು ಅವರಿಂದ ನಾವು ನಿರೀಕ್ಷಿಸಬಹುದು? ಕೇವಲ ಅವರಿಗೆ ಅನುಕೂಲವಾಗುವಂಥಹ ಕಾನುನುಗಳನ್ನು ಮಾತ್ರ ರಚಿಸಿ ಕೊಳ್ಳುವುದಿಲ್ಲವೇ? ಭಾರತ ಸಂವಿಧಾನ ನಮಗೆ ಕೊಟ್ಟಿರುವ ಅಮೂಲ್ಯವಾದ ಹಕ್ಕು ಮತದಾನದ ಹಕ್ಕು, ಈ ಹಕ್ಕನ್ನು ನಾವೆಷ್ಟು ಚಲಾಯಿಸುತ್ತೇವೆ? ಯಾವುದೇ ಪಕ್ಷವನ್ನು ಗಣನೆಯಲ್ಲಿ ಇಟ್ಟುಕೊಳ್ಳದೆ, ಸ್ಪರ್ದಿಯ ಜಾತಿ, ಮತ, ಲಿಂಗವನ್ನು ಪರಿಗಣಿಸದೆ ಯೋಗ್ಯ ವ್ಯಕ್ತಿಗಳನ್ನು ಆರಿಸಿ ಕಳುಹಿಸುವುದು ನಮ್ಮ ಕರ್ತವ್ಯ ಆಗಿದೆ. ಯೋಗ್ಯ ವ್ಯಕ್ತಿಗಳನ್ನು ಆರಿಸಿ ಕಳುಹಿಸಿದರೆ ಮಾತ್ರ ಪ್ರಜಾಪ್ರಭುತ್ವದ ಉಳಿವು, ದೇಶದ ಉಳಿವು, ನಮ್ಮ ಉಳಿವು ಸಾಧ್ಯ.

Technorati Profile








No comments: